ಹಲೋ ಸ್ನೇಹಿತರೇ, ಸರ್ಕಾರದ ಜನಪ್ರಿಯ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರ ಎಂದು ತಿಳಿಯಲು ಸಿಎಂ ಸಿದ್ದರಾಮಯ್ಯನವರೆ ಪರಿಶೀಲಿಸುವ ಸೂಚನೆಯನ್ನು ನೀಡಿದ್ದಾರೆ. ಇದರಂತೆ ಈ ಸರ್ಕಾರದ ಗ್ಯಾರೆಂಟಿಗಳಲ್ಲಿ ಅತ್ಯಂತ ಜನಪ್ರಿಯವಾದ ಗೃಹಲಕ್ಷ್ಮಿಯ ಹಣವನ್ನು ತಲುಪಿಸಲು ಸರ್ಕಾರ ಹೊಸ ಪ್ಲಾನ್ ಮಾಡಿದೆ. ಸರ್ಕಾರದ ಈ ಹೊಸ ಪ್ಲಾನ್ ಯಾವುದು.?

ಗೃಹಲಕ್ಷ್ಮಿ ಹಣವನ್ನು ತಲುಪಿಸಲು ಸರ್ಕಾರ ಹೊಸ ಪ್ಲಾನ್ ಮಾಡಿರುವುದು ಸ್ಪಷ್ಟವಾಗಿದೆ. ಎಂಪಿ ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ತಂತ್ರವನ್ನು ರೂಪಿಸಿದೆ. ಡಿಸೆಂಬರ್ 30 ರ ಒಳಗೆ ಗೃಹಲಕ್ಷ್ಮಿಯ ಯೋಜನೆಯ ಎಷ್ಟು ಫಲಾನುಭವಿಗಳಿದ್ದಾರೋ ಸರ್ಕಾರದ ಪ್ರಕಾರ 1.70 ಕೋಟಿಯಷ್ಟು ಫಲಾನುಭವಿಗಳಿದ್ದಾರೆ. ಇವರೆಲ್ಲರಿಗು ಕೂಡ ಹಣವನ್ನು ತಲುಪಿಸುವ ಪ್ಲಾನ್ ಮಾಡಲಾಗಿದೆ.
ಡಿಸೆಂಬರ್ 31 ನೇ ತಾರಿಕ್ ಒಳಗೆ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣವನ್ನು ಜಮೆ ಮಾಡಲು ಪ್ಲಾನ್ ಮಾಡಲಾಗಿದೆ. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯನವರೆ ಸೂಚನೆಯನ್ನು ಕೊಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಿಎಂ ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದಾರೆ ಸಿಬ್ಬಂದಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಟೆಕ್ನಿಕಲ್ ಸಮಸ್ಯೆಯಿಂದ ಹಣ ಜಮೆ ಆಗದಿದ್ದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲೆ ಸರಿಪಡಿಸಲು ಸೂಚನೆ.
ಗೃಹಲಕ್ಷ್ಮಿ ಅದಾಲತ್ ಅನ್ನು ಮಾಡಿ ಹಣವನ್ನು ಎಲ್ಲರಿಗು ಹಾಕಿ ಎಂದು ಹೇಳಿದ್ದಾರೆ. ನವೆಂಬರ್ ತನಕ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ, ಇದರಲ್ಲಿ 1.10 ಕೋಟಿ ಫಲಾನುಭವಿಗಳಿಗೆ ಹಣ ಜಮೆಯಾಗಿದೆ. ಇನ್ನು ಕೆಲವರಿಗೆ ಹಣ ಹೋಗಿಲ್ಲ ಇದೇ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯನವರೆ ಇದರ ಬಗ್ಗೆ ಚರ್ಚೆಯನ್ನು ಮಾಡಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಡಿಸೆಂಬರ್ 31 ರೊಳಗೆ ಎಲ್ಲಾ ಫಲಾನುಭವಿಗಳಿಗು ಹಣ ಹಾಕುವಂತೆ ಆದೇಶ.
ಇತರೆ ವಿಷಯಗಳು
RBI ಹೊಸ ನಿಯಮ: ಬ್ಯಾಂಕ್ಗಳಲ್ಲಿ ಸಾಲ ಪಡೆಯುವುದು ಇನ್ನೂ ಕಷ್ಟಕರ!! ಸಾಲದ ನಿಯಮ ಬಿಗಿ, ಬಡ್ಡಿದರದಲ್ಲಿ ಹೆಚ್ಚಳ