rtgh

ಸಿಹಿಸುದ್ದಿ: ರಾಜ್ಯ ಸರ್ಕಾರದಿಂದ ಬರ ಪರಿಹಾರ ಹಣ ರಿಲೀಸ್, ಯಾವ್ಯಾವ ಜಿಲ್ಲೆಗಳಿಗೆ ಎಷ್ಟು ಅನುದಾನ? ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್

ಬರ ಪರಿಸ್ಥಿತಿ ಅವಲೋಕಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಮುಂದಾಗಿರುವ ಬಿಜೆಪಿ ನಾಯಕರು ಬರ ಪರಿಹಾರ ನಿಧಿ ಬಿಡುಗಡೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಒತ್ತಾಯಿಸಿದ್ದಾರೆ. ಹಣಕ್ಕಾಗಿ ಕೇಂದ್ರಕ್ಕೆ ಮನವಿ ಮಾಡುವ ಬದಲು ಕೇಸರಿ ಪಕ್ಷದ ನಾಯಕರು ರಾಜ್ಯದಲ್ಲಿ ಬರಗಾಲವನ್ನು ನಿರ್ಣಯಿಸಲು ಸಮಯ ವ್ಯರ್ಥ ಮಾಡುತ್ತಿದ್ದಾರೆ ಮತ್ತು ಅವರ ಯೋಜನೆಯನ್ನು “ಪ್ರಹಸನ” ಎಂದು ಬಣ್ಣಿಸಿದರು ಎಂದು ಸಿಎಂ ಹೇಳಿದರು, ಆದರೆ ಶಿವಕುಮಾರ್ ಬಿಜೆಪಿ ನಾಯಕರನ್ನು ಪರಿಸ್ಥಿತಿಯನ್ನು ಅವಲೋಕಿಸಿ ಕೇಂದ್ರದಿಂದ ಪರಿಹಾರವನ್ನು ಕೇಳಿದರು.

drought relief fund karnataka news

ಕರ್ನಾಟಕರ ಸರ್ಕಾರ ಬರ ಪರಿಹಾರ ಹಣ (Drought relief fund ) ಬಿಡುಗಡೆ ಮಾಡಿದೆ. 31 ಜಿಲ್ಲೆಗಳ ಬೆಳೆ ನಷ್ಟ ಆಧರಿಸಿ ಎಸ್.ಡಿ.ಆರ್.ಎಫ್ ಅಡಿಯಲ್ಲಿ ಇಂದು (ನವೆಂಬರ್ 03) 324 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. 

ರಾಜ್ಯದ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಬರಪರಿಹಾರವಾಗಿ 17 ಸಾವಿರ ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದೆ. ಆದ್ರೆ ಕೇಂದ್ರ ಇದುವರೆಗೂ ಇನ್ನೂ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ರೈತರಿಗಾಗಿ ಸಣ್ಣ ಪ್ರಮಾಣದ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕೆ ಅಂತ 17 ಸಾವಿರ ಕೋಟಿ ರೂ. ಪರಿಹಾರ ಕೇಳಿದೆ. ಈವರೆಗೂ ಕೇಂದ್ರ ಸರ್ಕಾರ ಒಂದೂ ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಅಂತ ಸಿಎಂ ಹಾದಿಯಾಗಿ ಸಚಿವರು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಅಂತ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. 


ಯಾವ ಜಿಲ್ಲೆಗೆ ಎಷ್ಟು ಅನುದಾನವನ್ನು ನೀಡಲಿದೆ?

  1. ಬೆಂಗಳೂರು ನಗರ- 7.50 ಕೋಟಿ ರೂಪಾಯಿ
  2. ಬೆಂಗಳೂರು ಗ್ರಾಮಾಂತರ- 6 ಕೋಟಿ ರೂ.
  3. ರಾಮನಗರ-7.50 ಕೋಟಿ ರೂ.
  4. ಕೋಲಾರ – 9 ಕೋಟಿ ರೂ.
  5. ಚಿಕ್ಕಬಳ್ಳಾಪುರ- 9 ಕೋಟಿ ರೂ.
  6. ತುಮಕೂರು-15 ಕೋಟಿ ರೂ.
  7. ಚಿತ್ರದುರ್ಗ- 9 ಕೋಟಿ ರೂ.
  8. ದಾವಣಗೆರೆ- 9 ಕೋಟಿ ರೂ.
  9. ಚಾಮರಾಜನಗರ-7.50 ಕೋಟಿ ರೂ.
  10. ಮೈಸೂರು – 13.50 ಕೋಟಿ ರೂ.
  11. ಮಂಡ್ಯ- 10.50 ಕೋಟಿ ರೂ.
  12. ಬಳ್ಳಾರಿ- 7.50 ಕೋಟಿ ರೂ.
  13. ಕೊಪ್ಪಳ- 10.50 ಕೋಟಿ ರೂ.
  14. ರಾಯಚೂರು- 9 ಕೋಟಿ ರೂ.
  15. ಕಲಬುರಗಿ- 16.50 ಕೋಟಿ ರೂ.
  16. ಬೀದರ್- 4.50 ಕೋಟಿ ರೂ.
  17. ಬೆಳಗಾವಿ- 22.50 ಕೋಟಿ ರೂ.
  18. ಬಾಗಲಕೋಟೆ- 13.50 ಕೋಟಿ. ರೂ.
  19. ವಿಜಯಪುರ- 18 ಕೋಟಿ ರೂ.
  20. ಗದಗ-10.50 ಕೋಟಿ ರೂ.
  21. ಹಾವೇರಿ-12 ಕೋಟಿ.
  22. ಧಾರವಾಡ-12 ಕೋಟಿ ರೂ.
  23. ಶಿವಮೊಗ್ಗ-10.50 ಕೋಟಿ ರೂ.
  24. ಹಾಸನ- 12 ಕೋಟಿ ರೂ.
  25. ಚಿಕ್ಕಮಗಳೂರು-12 ಕೋಟಿ ರೂ
  26. ಕೊಡಗು-7.50 ಕೋಟಿ ರೂ.
  27. ದಕ್ಷಿಣ ಕನ್ನಡ- 3 ಕೋಟಿ ರೂ.
  28. ಉಡುಪಿ- 4.50 ಕೋಟಿ ರೂ.
  29. ಉತ್ತರ ಕನ್ನಡ-16.50 ಕೋಟಿ ರೂ.
  30. ಯಾದಗಿರಿ-9 ಕೋಟಿ ರೂ.
  31. ವಿಜಯನಗರ-9 ಕೋಟಿ ರೂ.

ಇತರೆ ವಿಷಯಗಳು:

ಡೆಂಗ್ಯೂ ಸೈಲೆಂಟ್ ಆಗ್ತಿದ್ದಂತೆ ಜಿಕಾ ವೈರಸ್‌ ಹವಾ ಶುರು! ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ಗ್ರಾಹಕರಿಗೆ ಜೇಬಿಗೆ ಮತ್ತೆ ಕತ್ತರಿ!13 ಜಿಲ್ಲೆಗಳಲ್ಲಿ ಗಣನೀಯ ಏರಿಕೆ ಕಂಡ ಪೆಟ್ರೋಲ್‌ ರೇಟ್!

Leave a Comment